ಕಾರ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳ ತಾಲೂಕಿನ ಬಜಗೋಳಿ ವಲಯದ ಮಾಳ ಕಾರ್ಯಕ್ಷೇತ್ರದಲ್ಲಿ ಬೆನಕ ಹಾಗೂ ಭೂಮಿಕಾ ಜ್ಞಾನ ವಿಕಾಸ ಕೇಂದ್ರ ದ ವಾರ್ಷಿಕೋತ್ಸವ ಕಾರ್ಯಕ್ರಮವು ಕೇಂದ್ರದ ಸದಸ್ಯರಾದ ಭಾರತಿ ಅವರ ಪ್ರಾರ್ಥನೆ ಯೊಂದಿಗೆ ಆರಂಭ ಆಯಿತು. ಕಾರ್ಯಕ್ರಮವನ್ನು
ಅನಿಲ್ ಎಸ್ ಪೂಜಾರಿ ಅಧ್ಯಕ್ಷರು ಮಾಳ ಕೆರ್ವಶೆ ವ್ಯವಸಾಯ ಸೇವಾ ಸಹಕಾರಿ ಸಂಘಇವರು ಉದ್ಘಾಟಿಸಿದರು.
ಕೇಂದ್ರದ ಸದಸ್ಯರಾದ ವಸಂತಿ, ಶಾಂಭವಿ,ಸವಿತಾ, ವಿಮಲ ಕೇಂದ್ರದಿಂದ ಆಗಿರುವ ಪ್ರಯೋಜನ ದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಳ ಪಂಚಾಯತ್ ಅಧ್ಯಕ್ಷರಾದ ಉಮೇಶ್ ಪೂಜಾರಿರವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಾಲಾ sdmc ಅಧ್ಯಕ್ಷರಾದ ಪ್ರಶಾಂತ್ ಮೂಲ್ಯ ಹರಿಶ್ಚಂದ್ರ ತೆಂಡೂಲ್ಕರ್ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು,ನಾರಾಯಣ ಪೂಜಾರಿ ನವಜೀವನ ಸಮಿತಿ ಅಧ್ಯಕ್ಷರು,ಸುಧಾಕರ್ ನಾಯಕ್, ಪಂಚಾಯತ್ ಸದಸ್ಯರಾದ ಶಶಿಕಲಾ, ಕೊಡಂಗೆ ಎ ಒಕ್ಕೂಟದ ಅಧ್ಯಕ್ಷರಾದ ದಿನೇಶ್ ಪೂಜಾರಿ, ಕೊಡಂಗೆ b ಒಕ್ಕೂಟದ ಅಧ್ಯಕ್ಷರಾದ ಪ್ರವೀಣ್ ಹೆಗ್ಡೆ , ಮೇಲ್ವಿಚಾರಕರಾದ ಮಧುಕಿರನ್ ಉಪಸ್ಥಿತಿ ಇದ್ದರು. ಕಾರ್ಯಕ್ರಮದಲ್ಲಿ ಕೇಂದ್ರದ ಸದಸ್ಯರಿಗೆ ಪುಷ್ಪಗುಚ್ಛ ತಯಾರಿ , ನೀರಿನಲ್ಲಿ ಬಾಲ್ ಊದುವುದು , ಅದೃಷ್ಟ ಆಟ, ಬಾಟಲಿಗೆ ನೀರು ತುಂಬಿಸುವುದು, ಗುಂಪು ಆಟ ಗಳನ್ನ ಆಡಿಸಿದ್ದು ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕೇಂದ್ರದ ಸದಸ್ಯರು ವಿವಿಧ ನೃತ್ಯ ಹಾಗೂ ಒಂದು ಕಿರು ನಾಟಕ ದ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ವನ್ನ ನೀಡಿ ಮನರಂಜನೆ ನೀಡಿದರು.
ಕಾರ್ಯಕ್ರಮವನ್ನು ತಾಲೂಕಿನ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸವಿತಾ ನಿರೂಪಿಸಿದರು, ಸೇವಾ ಪ್ರತಿನಿಧಿ ಜಯಲಕ್ಷ್ಮಿ ಸ್ವಾಗತಿಸಿದರು, ಸದಸ್ಯರಾದ ಶಾಂಭವಿ ಧನ್ಯವಾದ ಮಾಡಿದರು.