ಉಡುಪಿ:ಅಕ್ಟೋಬರ್ 09: ದ್ರಶ್ಯ ನ್ಯೂಸ್ : ಉಡುಪಿ ಜಿಲ್ಲಾ ಶ್ರೀರಾಮಸೇನೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ದಿನಾಂಕ 8 ರ ಆದಿತ್ಯವಾರದಂದು ಬನ್ನಂಜೆ ನಾರಾಯಣ ಗುರು ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ರಾಜ್ಯ ಪ್ರ.ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್ ಉದ್ಘಾಟಿಸಿದರು. ಗೌರವಾಧ್ಯಕ್ಷರಾಗಿ ಡಾ. ವಿಜಯೇಂದ್ರ ವಸಂತ್, ಕಾನೂನು ಸಲಹೆಗಾರರಾಗಿ ಅಖಿಲ್ ಬಿ ಹೆಗ್ಡೆ, ಗೌರವ ಸಲಹೆಗಾರರಾಗಿ ಚಿತ್ತರಂಜನ್ ಶೆಟ್ಟಿ, ನಾರಾಯಣ ರಾವ್ ಕಾರ್ಕಳ, ಪ್ರ.ಕಾರ್ಯದರ್ಶಿಯಾಗಿ ಸುದರ್ಶನ್ ಪೂಜಾರಿ, ವಕ್ತಾರರಾಗಿ ಶರತ್ ಮಣಿಪಾಲ, ಸಂಪರ್ಕ ಪ್ರಮುಖ ಆಗಿ ಸುಜಿತ್ ನಿಟ್ಟೂರು, ಸಂಘಟನಾ ಕಾರ್ಯದರ್ಶಿಯಾಗಿ ಕೀರ್ತಿರಾಜ್ ಕಿದಿಯೂರು, ಕಾರ್ಯದರ್ಶಿಯಾಗಿ ವಿಕ್ರಂ ಕುಂದರ್, ನಿತೇಶ್ ಪೂಜಾರಿ ಯವರನ್ನು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಮಂಗಳೂರು ವಿಭಾಗ ಅಧ್ಯಕ್ಷ ಮದುಸೂದನ್, ಉಡುಪಿ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು, ಹಿಂದೂ ಮುಖಂಡೆಯರಾದ ಶ್ರೀಮತಿ ವಿನಯ ರಾನಡೆ ಕಾರ್ಕಳ, ಶ್ರೀಮತಿ ರೂಪ ಶೆಟ್ಟಿ ನಿಟ್ಟೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಸಿದ್ದಬಸಯ್ಯ ಚಿಕ್ಕಮಠ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕೀರ್ತಿರಾಜ್ ನಿರೂಪಿಸಿದರು.