ಉಡುಪಿ:ಅಕ್ಟೋಬರ್ 07:ದ್ರಶ್ಯ ನ್ಯೂಸ್ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಉಡುಪಿಯಲ್ಲಿ ನಡೆಯಲಿರುವ ಬಂಟರ ಕ್ರೀಡಾ ಸಂಗಮ ಮತ್ತು ಸಾಂಸ್ಕೃತಿಕ ವೈಭವದ ಪೂರ್ವಭಾವಿ ಸಭೆ ಜಯಕರ ಶೆಟ್ಟಿ ಇಂದ್ರಾಳಿಯವರ ನೇತ್ರತ್ವದಲ್ಲಿ ಅಕ್ಟೋಬರ್ 7ರಂದು ಜರಗಿತು.ಸಭೆಯ ಅಧ್ಯಕ್ಷತೆಯನ್ನು ಡಾ| ಬಿ.ಬಿ ಶೆಟ್ಟಿ ವಹಿಸಿದ್ದರು.
ವಿವಿಧ ಸಮಿತಿಯ ಮುಖ್ಯಸ್ಥರು ಗಳು ಕಾರ್ಯಕ್ರಮದ ಪೂರ್ವ ತಯಾರಿ ಬಗ್ಗೆ ಮಾಹಿತಿ ನೀಡಿದರು.
ಅಕ್ಟೋಬರ್ 28 ಮತ್ತು 29 ರಂದು ಅಜ್ಜರಕಾಡು ಮೈದಾನ ಮತ್ತು ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದ ಪ್ರಚಾರದ ವಾಹನದ ಬಿತ್ತಿ ಪತ್ರವನ್ನು ಬಿಡುಗಡೆ ಗೊಳಿಸಲಾಯಿತು.
ಈ ಸಂದರ್ಭದಲ್ಲಿ ಡಾ|ರೋಶನ್ ಶೆಟ್ಡಿ,ಮನೋಹರ್ ಶೆಟ್ಟಿ ,ರಾಧ ಡೆವಲಪರ್ಸ್, ತೂನ್ಸೆ ತ್ಯಾಗರಾಜ ಶೆಟ್ಟಿ ಕೊಲ್ಹಾಪುರ,ನಾಗೇಶ್ ಹೆಗ್ಡೆ, ಸಂತೋಷ ಶೆಟ್ಟಿ ಪಡುಬಿದ್ರೆ,ನವೀನ್ ಶೆಟ್ಡಿ ಪಡುಬಿದ್ರೆ, ಉದಯ ಶೆಟ್ಟಿ ಮುನಿಯಾಲ್, ಭುಜಂಗ ಶೆಟ್ಟಿ ಬ್ರಹ್ಮಾವರ,ಹರೀಶ್ ಶೆಟ್ಟಿ ಪೇತ್ರಿ,ನಿತೀಶ್ ಶೆಟ್ಟಿ ಹಿರಿಯಡ್ಕ, ಶ್ರೀದರ ಶೆಟ್ಟಿಅರೋರು,ಉಪಸ್ಥಿತರಿದ್ದರು ಈಶ್ವರ ಚಿಟ್ಪಾಡಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.