ಉಡುಪಿ : ಕುಕ್ಕೆಹಳ್ಳಿ ಗ್ರಾಮದ ರೈತರೊಬ್ಬರು 31 ಕ್ವಿಂಟಾಲ್ ಭತ್ತವನ್ನು ಉಡುಪಿ ಎಪಿಎಂಸಿ ಖರೀದಿ ಕೇಂದ್ರದ ಮೂಲಕ ರಾಜ್ಯ ಆಹಾರ ನಿಗಮಕ್ಕೆ ನೀಡಿದ್ದರು,ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸರಕಾರಕ್ಕೆ ಕುಚ್ಚಲು ಅಕ್ಕಿಗೆ ಪೂರಕ ವಾಗುವ ಭತ್ತ ನೀಡಿದ ರೈತನಿಗೆ 31 ಕ್ಟಿಂಟಾಲ್ಗೆ 78,926 ರೂ. ಸರಕಾರದಿಂದ ಪಾವತಿಯಾಗಬೇಕಾಗಿತ್ತು
ಆದರೆ ಹಣ 7 ತಿಂಗಳಾದರೂ ರೈತನಿಗೆ ಬಂದಿರಲಿಲ್ಲ,ಅಧಿಕಾರಿಗಳು ತಾಂತ್ರಿಕ ಸಮಸ್ಯೆ ಬಗೆಹರಿಸಿ ರೈತನ ಖಾತೆಗೆ ಪೂರ್ತಿ ಹಣ ಜಮಾ ಮಾಡಿಸಿದ್ದಾರೆ
ಸುಮಾರು 7 ತಿಂಗಳ ಬಳಿಕ ಇದೀಗ ಸರಕಾರದಿಂದ ರೈತರ ಖಾತೆಗೆ ಹಣ ಸಂದಾಯವಾಗಿದೆ.