ಪಡುಬಿದ್ರೆ: ಬೈಕ್ ಮತ್ತು ಬಸ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಮೃತ ಪಟ್ಟ ಘಟನೆ ಪಡುಬಿದ್ರೆ ನಂದಿಕೂರ್ ಬಳಿ ಇಂದು ಮುಂಜಾನೆ ನಡೆದಿದೆ
ಮೃತ ಪಟ್ಟವರನ್ನು ಖ್ಯಾತ ಯೂಟ್ಯೂಬ್ ಬ್ಲಾಗರ್ ಅಶ್ವಿತ್ ಶೆಟ್ಟಿ ಅಜೆಕಾರ್ (34) ಎಂದು ತಿಳಿದು ಬಂದಿದೆ
ಘಟನೆಯ ವಿವರ : ಮಂಗಳೂರಿಗೆ ಬೈಕ್ ನಲ್ಲಿ ತೆರಳುತ್ತಿದ್ದು, ನಂದಿಕೂರ್ ಬಳಿ ನಿಂತಿದ್ದ ಬಸ್ ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬಂದ ಕಾರ್ಕಳದತ್ತ ತೆರಳುತಿದ್ದ ವೇಗಧೂತ ಬಸ್ ಮುಂಭಾಗಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ
ಡಿಕ್ಕಿಯ ರಭಸಕ್ಕೆ ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ.ಎಂದು ತಿಳಿದು ಬಂದಿದೆ
ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ.