ಉಡುಪಿ: ಜಿಲ್ಲಾ ಮಟ್ಟದ ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಸಮಾರಂಭ (ಕುಟುಂಬದ ಯಜಮಾನಿ ಮಹಿಳೆಗೆ ಪ್ರತೀ ತಿಂಗಳು ರೂ. 2000) ಆಗಸ್ಟ್ 30ರ ಬುಧವಾರ ಮಧ್ಯಾಹ್ನ 12:00 ಗಂಟೆಗೆ ಸರಿಯಾಗಿ ಬಾಸೆಲ್ ಮಿಷನರಿಸ್ ಮೆಮೋರಿಯಲ್ ಆಡಿಟೋರಿಯಂ ಮಿಷನ್ ಕಂಪೌಂಡ್, ಕಿನ್ನಿಮುಲ್ಕಿ ಉಡುಪಿಯಲ್ಲಿ ಜರುಗಲಿದೆ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಉಡುಪಿ ನಗರಸಭೆ ಇವುಗಳ ಸಹಯೋಗದೊಂದಿಗೆ ಕುಟುಂಬದ ಯಜಮಾನಿ ಮಹಿಳೆಗೆ ಪ್ರತೀ ತಿಂಗಳು 2000 ರೂ. ನೀಡುವ ಗೃಹಲಕ್ಷ್ಮೀ ಯೋಜನೆಯ ಅನುಷ್ಠಾನ ಸಮಾರಂಭ ನಡೆಯಲ್ಲಿದ್ದು ಈ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರು ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ , ಶ್ರೀಮತಿ ಲಕ್ಷ್ಮೀ ಆರ್. ಹೆಬ್ಬಾಳಕರ್ ಉದ್ಘಾಟಿಸಲಿದ್ದಾರೆ
ಶಾಸಕ ಯಶ್ಪಾಲ್ ಎ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶಾಸಕರು, ಜನಪ್ರತಿನಿಧಿಗಳು, ವಿವಿಧ ಸಂಸ್ಥೆಗಳ ಮುಖ್ಯಸ್ಥರು, ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಮುಖ್ಯ ಅತಿಥಿಗಳಾಗಿ ಕೆ. ಜಯಪ್ರಕಾಶ್ ಹೆಗ್ಡೆ ಬಿ. ವೈ. ರಾಘವೇಂದ್ರ ,ಸುನಿಲ್ ಕುಮಾರ್, ಗುರುರಾಜ ಶೆಟ್ಟಿ ಗಂಟಿಹೊಳೆ,ಶ್ರೀ ಎ. ಕಿರಣ್ ಕುಮಾರ್ ಕಿರಣ್ ಕೋಡ್ಗಿ ,ಗುರ್ಮ ಸುರೇಶ್ ಶೆಟ್ಟಿ,ಕೋಟ ಶ್ರೀನಿವಾಸ ಪೂಜಾರಿ,ಎಸ್.ಎಲ್. ಬೋಟೆ ಗೌಡ ,ಡಾ. ತೇಜಸ್ವಿನಿ ಗೌಡ, ಮಂಜುನಾಥ ಭಂಡಾರಿ, ಡಾ|| ಎಮ್.ಟಿ. ರೇಜು, ಭಾ.ಆ.ಸ,ಡಾ. ಕೆ. ವಿದ್ಯಾಕುಮಾರಿ,ಜಿಲ್ಲಾಧಿಕಾರಿ ಉಡುಪಿ ಜಿಲ್ಲೆ ಶ್ರೀ ಅಕ್ಷಯ್ ಎಂ. ಹಾಕಿ, ಶ್ರೀ ಪ್ರಸನ್ನ ಹೆಚ್, ಭಾ.ಆ.ಸ ಶ್ಯಾಮಲಾ ಸಿ. ಕೆ. ಉಪ ನಿರ್ದಶಕರು ಭಾಗವಹಿಸಲಿದ್ದಾರೆ
:-