ಉಡುಪಿ: ಏಪ್ರಿಲ್ 02:ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ , ವಿಶ್ವಗೀತಾ ಪರ್ಯಾಯದ ಅಂಗವಾಗಿ ರಾಜಂಗಣ, ಮಧ್ವ ಮಂಟಪದಲ್ಲಿ 18.1.24 ರಿಂದ 30.3.25ರ ತನಕ749 ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, 31.3.25 ರಂದು ರಾಜಾಂಗಣದಲ್ಲಿ 750 ನೆ ಕಾರ್ಯಕ್ರಮವಾದ ಬೆಂಗಳೂರಿನ ನಟೇಶ ನೃತ್ಯಾಲಯದ, ಶ್ರೀಮತಿ ನಯನಾ ಅನಂದನ್ ಹಾಗೂ ಬಳಗದವರಿಂದ ಶ್ರೀ ಕೃಷ್ಣ ಎನ್ನುವ ನೃತ್ಯ ನಾಟಕದ ಪ್ರದರ್ಶನಕ್ಕೆ ಶ್ರೀ ಶ್ರೀ ಸುಗುಣೇಂದ್ರ ಶ್ರೀಗಳವರು ಚಾಲನೆ ನೀಡಿದರು.
ರಾಜಾಂಗಣದಲ್ಲಿ ಹಾಗೂ ಮಧ್ವಮಂಟ ಪದಲ್ಲಿ ಶ್ರೀ ಕೃಷ್ಣ ಮುಖ್ಯಪ್ರಾಣರ ಸಾನ್ನಿಧ್ಯ ದಲ್ಲಿ ಕಲಾ ಸೇವೆ ಮಾಡುವುದರಿಂದ ಕಲಾವಿದರ ಇಷ್ಟಾರ್ಥಗಳು ನೆರವೇರುವುದು.ಎಂದು ಆಶೀರ್ವದಿಸಿ ಎಲ್ಲಾ ಕಲಾವಿದರಿಗೂ ಕೋಟಿ ಗೀತಾ ಧೀಕ್ಷೆಯೊಂದಿಗೆ ಅನುಗ್ರಹಿಸಿದರು