ಉಡುಪಿ:ಫೆಬ್ರವರಿ 15:ತೆರವಾಗಿದ್ದ ಉಡುಪಿ ಅಪರ ಜಿಲ್ಲಾಧಿಕಾರಿ ಹುದ್ದೆಗೆ ವಿಜಯಪುರ ಜಿಲ್ಲೆಯ ಇಂಡಿ ಉಪವಿಭಾಗದ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ಶ್ರೇಣಿ ಕೆಎಎಸ್ ಅಧಿಕಾರಿ ಅಬೀದ ಗದ್ಯಾಳ ಅವರನ್ನು ಸರಕಾರ ವರ್ಗಾಯಿಸಿದೆ.
ಉಡುಪಿ ಎಡಿಸಿಯಾಗಿ ಕಾರ್ಯನಿರ್ವಹಿಸಿದ್ದ ಮಮತಾದೇವಿ ಅವರನ್ನು ಕಳೆದ ತಿಂಗಳು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು.