ಉಡುಪಿ : ಫೆಬ್ರವರಿ 07:ಉಡುಪಿಯ ಅಲೆವೂರಿನಲ್ಲಿ ಸಂಕಲ್ಪ ಸಂಭಾಂಗಣದಲ್ಲಿ ಮಡಾಮಕ್ಕಿ ಮೇಳದವರ ಯಕ್ಷಗಾನ ಪ್ರಸಂಗ ನಡೆಯುತ್ತಿತ್ತು,ಮಧ್ಯರಾತ್ರಿ 12-30ರ ವರೆಗೆ ಯಕ್ಷಗಾನ ನಡೆಯುತ್ತಿದ್ದ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಬಂದು ನಿಲ್ಲಿಸಿದ ಪ್ರಸಂಗ ನಡೆದಿದೆ.
ತಡರಾತ್ರಿಯಾದ ಕಾರಣ ಯಾರೋ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಯಕ್ಷಗಾನ ನಿಲ್ಲಿಸುವಂತೆ ಮನವಿ ಮಾಡಿದ್ದು, ಅದರಂತೆ ಯಕ್ಷಗಾನ ನಿಲ್ಲಿಸಲಾಯಿತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.