ಉಡುಪಿ :ಅಕ್ಟೋಬರ್ 01:ದಿನದಿಂದ ದಿನಕ್ಕೆ ಊರ ಪರವೂರ ಭಕ್ತಾಭಿಮಾನಿಗಳನ್ನು ತನ್ನತ್ತ ಸೆಳೆಯುತ್ತಿರುವ ಶ್ರೀ ಕ್ಷೇತ್ರದಲ್ಲಿ ಈ ಬಾರಿಯೂ ಕೂಡ ಶರನ್ನವರಾತ್ರಿಯನ್ನು ‘ದಸರ ಉತ್ಸವ’ ರೂಪದಲ್ಲಿ ಆಚರಿಸಲು ಸಂಕಲ್ಪ ಮಾಡಲಾಗಿದೆ.
ಇದೇ ಬರುವ ಅಕ್ಟೋಬರ್ 3ರಿಂದ 12ರವರೆಗೆ ನವದುರ್ಗೆಯರನ್ನು ಮತ್ತು ಶ್ರೀ ಶಾರದ ಮಾತೆಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಹತ್ತು ದಿನಗಳ ಕಾಲವೂ ನಿತ್ಯ ಚಂಡಿಕಾಯಾಗ, ಕಲ್ಪೋಕ್ತ ಪೂಜೆ, ಅನ್ನಸಂತರ್ಪಣೆ, ನಿತ್ಯ ಭಜನೆ ಹಾಗೂ ಪ್ರತೀದಿನ ಸಾಂಸ್ಕೃತಿಕ ತಿಕ ಕಾರ್ಯಕ್ರಮ ಸೇರಿದಂತೆ ಅಕ್ಟೋಬರ್ 12ರಂದು ಭವ್ಯ ಶೋಭಾಯಾತ್ರೆಯ ಮೂಲಕ ವಿಗ್ರಹಗಳ ವಿಸರ್ಜನೆ ಮಾಡುವುದೆಂದು ನಿರ್ಣಯಿಸಲಾಗಿದೆ.
ಈ ಸದ್ರಿ ಉತ್ಸವದಲ್ಲಿ 10 ದಿನಗಳಲ್ಲಿ ಸುಮಾರು 4ರಿಂದ 5 ಲಕ್ಷ ಭಕ್ತಾಭಿಮಾನಿಗಳಿಗೆ ಅನ್ನಪ್ರಸಾದದ ವ್ಯವಸ್ಥೆಯನ್ನು ಮಾಡುವುದೆಂದು ನಿರ್ಧರಿಸಲಾಗಿದ್ದು, ಹಾಗಾಗಿ ಭಕ್ತರು ತಮ್ಮ ವೈಯಕ್ತಿಕ ನೆಲೆಯಲ್ಲಿ/ಸಂಘ ಸಂಸ್ಥೆಗಳ ವತಿಯಿಂದ ದಿನಾಂಕ:01-10-2024ರ ಮಂಗಳವಾರ 10.30ಕ್ಕೆ ಸರಿಯಾಗಿ ಹೊರೆಕಾಣಿಕೆ ರೂಪದಲ್ಲಿ ಅಕ್ಕಿ, ಬೆಲ್ಲ, ತೊಗರಿಬೇಳೆ, ತೆಂಗಿನಕಾಯಿ, ತರಕಾರಿಯನ್ನು ದೇವಸ್ಥಾನಕ್ಕೆ ತಲುಪಿಸುವಂತೆ ಹಾಗೂ 10 ದಿನಗಳವರೆಗೆ ನಡೆಯುವ ಈ ದಸರಾ ಉತ್ಸವದಲ್ಲಿ ತಪ್ಪದೇ ಭಾಗವಹಿಸುವಂತೆ ದೇವಸ್ಥಾನದ ಆಡಳಿತ ಮಂಡಳಿ ವಿನಂತಿಸಿಕೊಂಡಿದೆ