ಉಡುಪಿ : ಸೆಪ್ಟೆಂಬರ್ 19 : YSCA ಸಂಘ ಮರ್ಣೆ ಇದರ ವತಿಯಿಂದ ಊರಿನ ಎರಡು ಬಡ ಕುಟುಂಬಗಳಿಗೆ ಸಹಾಯಧನವನ್ನು ವಿತರಿಸಲಾಯಿತು.
ಮರ್ಣೆ ಸರ್ಕಲ್ ಬಳಿಯ ದಿವಂಗತ ಸುಂದರ ಆಚಾರ್ಯರವರ ಧರ್ಮಪತ್ನಿ ಶ್ರೀಮತಿ ವನಜರವರಿಗೂ ಹಾಗೂ ಇತ್ತೀಚೆಗೆ ಅಸೌಖ್ಯ ಕಾರಣದಿಂದ ನಿಧನ ಹೊಂದಿದ ಮರ್ಣೆ ಶ್ರೀಧರ್ ಆಚಾರ್ಯರವರ ಧರ್ಮಪತ್ನಿ ಶ್ರೀಮತಿ ಉಮಾವತಿಯವರ ಎರಡು ಚಿಕ್ಕ ಮಕ್ಕಳಿಗೆ ಸಹಾಯಧನದ ರೂಪದಲ್ಲಿ ಸದಸ್ಯರಿಂದ ಒಟ್ಟಾದ ಮೊತ್ತ 21 ಸಾವಿರ ರುಪಾಯಿಗಳನ್ನು ಅವರ ಮನೆಗೆ ಭೇಟಿ ಮಾಡಿ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಗೌರವದ್ಯಕ್ಷರಾದ ಹರೀಶ್ ಶೆಟ್ಟಿ,ಅಧ್ಯಕ್ಷರಾದ ರಾಘವೇಂದ್ರ ಪ್ರಭು,ಕಾರ್ಯದರ್ಶಿ ಸುರೇಶ್ ಆಚಾರ್ಯ ಹಾಗೂ ಸದಸ್ಯರಾದ ದೇವದಾಸ್ ಪ್ರಭು,ಶಂಕರ್ ಮೂಲ್ಯ,ಪ್ರೇಮನಾಥ್ ಮರ್ಣೆ, ಮಹೇಶ್ ಮರ್ಣೆ,ರವೀಂದ್ರ ಆಚಾರ್ಯ,ಸಂದೀಪ್ ಆಚಾರ್ಯರವರು ಉಪಸ್ಥಿತರಿದ್ದರು.