ಉಡುಪಿ : ಸೆಪ್ಟೆಂಬರ್ 16:ತಡರಾತ್ರಿಯವರೆಗೆ ಡಿಜೆ ಸೌಂಡ್ ಬಳಸಿ ಕರ್ಕಶ ಶಬ್ಧಗಳಿಂದ ಸಾರ್ವಜನಿಕರಿಗೆ ತೊಂದರೆ ನೀಡಿರುವ ಬಗ್ಗೆ ಕೊಡವೂರು ಸಿಟಿಜನ್ ಸರ್ಕಲ್ ಕುಮಾರ್ ಸೌಂಡ್ ಸಿಸ್ಟಮ್ ಮಾಲಕ ಪ್ರಕಾಶ್ ವಿರುದ್ಧ ಮಲ್ಪೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆ. 13ರಂದು ರಾತ್ರಿ ಸ್ವಾಗತ ಗೋಪುರದ ಬಳಿ ಗಣೇಶ ಮೆರವಣಿಗೆಯ ಸಮಯದಲ್ಲಿ ಅವರು ಕಡೆಕಾರು ಗ್ರಾಮದ ಕಿನ್ನಿಮೂಲ್ಕಿಯಲ್ಲಿ ಧ್ವನಿವರ್ಧಕ ಅಥವಾ ಇತರ ಸಲಕರಣೆಗಳನ್ನು ಉಪಯೋಗಿಸಲು ಯಾವುದೇ ಅನುಮತಿ ಪಡೆಯದೆ ಸಾರ್ವಜನಿಕ ರಸ್ತೆಯಲ್ಲಿ ಡಿ.ಜೆ. ಧ್ವನಿವರ್ಧಕವನ್ನು ಬಳಸಿ ನಿಯಮ ಉಲ್ಲಂಘಿಸಿದ್ದಾರೆ. ಡಿ.ಜೆ. ಧ್ವನಿವರ್ಧಕದಿಂದ ಕರ್ಕಶ ಶಬ್ಧ ಬರುವಂತೆ ಮಾಡಿ ಸಾರ್ವಜನಿಕರಿಗೆ ತೊಂದರೆಯನ್ನು ಉಂಟು ಮಾಡಿದ್ದಾರೆಂದು ಪ್ರಕರಣ ದಾಖಲಾಗಿದೆ.