ಬ್ರಹ್ಮಾವರ: ಸೆಪ್ಟೆಂಬರ್ 03:ಇಲ್ಲಿನ ಧರ್ಮಾವರಂ ಬಳಿ ಸೋಮವಾರ ಸಂಭವಿಸಿದ ಅಪಘಾತದಲ್ಲಿ ಕುಮ್ರಗೋಡು ಶಾಲೆ ಸಮೀಪದ ನಿವಾಸಿ ನಿಗೋರಿ ಡಿ’ಸೋಜಾ (74) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅವರು ಕುಮ್ರಗೋಡು ಕಡೆಯಿಂದ ಧರ್ಮಾವರಂ ಅಡಿಟೋರಿಯಂ ಕಡೆಗೆ ಹೆದ್ದಾರಿ ದಾಟುತ್ತಿದ್ದಾಗ ಕಂಟೈನರ್ ವಾಹನ ಢಿಕ್ಕಿ ಹೊಡೆದಿತ್ತು.
ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.