ಕಾರ್ಕಳ : ಸೆಪ್ಟೆಂಬರ್ 02:ಉಡುಪಿ ಜಿಲ್ಲಾ ಸೈನೇಜ್ ಅಸೋಸಿಯೇಶನ್ ರಿ. ಇದರ ಪ್ರಥಮ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಸದಸ್ಯರಾಗಿದ್ದು ಸೈನೇಜ್ ವ್ರತ್ತಿಯಲ್ಲಿ ಸುಮಾರು ೪೦ ವರುಷಗಳಿಂದ ಚಿತ್ರಕಲಾವಿದರಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ಕಳದ ಶ್ರೀಯುತ ಬಿ.ವಿ. ಆನಂದಮೂರ್ತಿ ಕಾರ್ಕಳ ಹಾಗೂ ಶ್ರೀಯುತ ಸುದೀಪ್ ಭಟ್ ಹೆಬ್ರಿ ಇವರ ಕಲಾ ಪ್ರೌಢಿಮೆಯನ್ನು ಪರಿಗಣಿಸಿ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಸಂಘಧ ಅಧ್ಯಕ್ಷರಾದ ಶ್ರೀಯುತ ರಾಜೇಶ್ ಕುಮಾರ್ ಅಂಬಾಡಿ, ಗೌರವಾಧ್ಯಕ್ಷರಾದ ಶ್ರೀಯುತ ದಾಮೋದರ್ ಪೈ ಕುಂದಾಪುರ, ಮುಖ್ಯ ಅತಿಥಿಗಳಾಗಿ ಶ್ರೀಯುತ ಎಂ ಕೆ ದಿನೇಶ್ ಮೂಡಬಿದ್ರಿ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಹರೀಶ್ ಅಮೀನ್ ಸಂತೆಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.