ಕಾರ್ಕಳ :ಆಗಸ್ಟ್ 12:ಆರ್ಯ ಮರಾಠ ಹಾಗೂ ಕ್ಷತ್ರಿಯ ಮರಾಠ ಸಮಾಜ ಬಾಂಧವರಿಂದ ಶ್ರೀ ಶೃಂಗೇರಿ ಜಗದ್ಗುರುಗಳ ಚಾತುರ್ಮಾಸ್ಯಾಚರಣೆ ಸಂದರ್ಭ ಗುರುವಂದನಾ ಕಾರ್ಯಕ್ರಮವು 11.08.24 ನೇ ಭಾನುವಾರ ಶೃಂಗೇರಿಯಲ್ಲಿ ಜರಗಿತು.
ಈ ಕಾರ್ಯಕ್ರಮದಲ್ಲಿ ಮಂಗಳೂರು, ಕಾರ್ಕಳ, ಉಡುಪಿ, ಮೂಲ್ಕಿ, ಸಿದ್ಧಾಪುರ, ಕೊಪ್ಪ, ತೀರ್ಥಹಳ್ಳಿ ಭಾಗಗಳಿಂದ ಸುಮಾರು 350 ಕ್ಕೂ ಹೆಚ್ಚಿನ ಕ್ಷತ್ರಿಯ ಮರಾಠ ಸಮಾಜ ಬಾಂಧವರು ಭಾಗವಹಿಸಿದರು. ಪರಮ ಪೂಜ್ಯ ಗುರುಗಳು ಆಶೀರ್ವಚನವಿತ್ತು , ಮಂತ್ರಾಕ್ಷತೆಯನ್ನು ನೀಡಿ ಆಶೀರ್ವದಿಸಿದರು.