ಉಡುಪಿ:ಆಗಸ್ಟ್ 10:ಅನಧಿಕೃತವಾಗಿ ಮಗುವನ್ನು ಮಾರಾಟ ಮತ್ತು ಮಗುವನ್ನು ಪಡೆದುಕೊಂಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಜುಲೈ 19 ರಂದು ಆರೋಪಿತರಾದ ರಾಬಿಯಾ ಬಾನು ಮತ್ತು ಖಾಲಿದ್ ಸಯ್ಯದ್ ಇವರಿಗೆ ಹೆಣ್ಣು ಮಗು ಜನಿಸಿದ್ದು, ಹೆಣ್ಣು ಮಗು ಅವರ ವಶದಲ್ಲಿ ಇಲ್ಲದೇ ಇರುವ ಬಗ್ಗೆ ದಿನಾಂಕ 06/08/2024 ರಂದು ಪೆರಂಪಳ್ಳಿಯ ಅಂಗನವಾಡಿ ಕಾರ್ಯಕರ್ತೆ ಸರಿತಾ ಡಿಸೋಜಾರವರು ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿರುತ್ತಾರೆ.
ಪಿರ್ಯಾದಿದಾರರು ಮತ್ತು ಯೋಗೀಶ್ ಮಕ್ಕಳ ರಕ್ಷಣಾ ಘಟಕದ ಸಮಾಜ ಕಾರ್ಯಕರ್ತ ಹಾಗೂ ಸರಿತಾ ಡಿಸೋಜಾರವರೊಂದಿಗೆ ಪೆರಂಪಳ್ಳಿಯ ಶೀಂಬ್ರಾ ಭಟ್ರಕೋಡಿ ಗೆ ಭೇಟಿ ನೀಡಿದ್ದು, ಆರೋಪಿತರ ಮನೆಗೆ ಬೀಗ ಹಾಕಲಾಗಿತ್ತು.
ಆಪಾದಿತ ಕಾಲಿದ್ ಸಯ್ಯದ್ ಗೆ ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ.ಬಳಿಕ ಸ್ವಿಚ್ ಆಪ್ ಆಗಿರುತ್ತದೆ. ಆಗ ಪಿರ್ಯಾದಿದಾರರು ಮಹಿಳಾ ಪೊಲೀಸ್ ಠಾಣೆಗೆ ಈ ಬಗ್ಗೆ ಲಿಖಿತ ಪಿರ್ಯಾದಿಯನ್ನು ನೀಡಿದ್ದು, ದಿನಾಂಕ 07/08/2024 ರಂದು ಆರೋಪಿತರನ್ನು ಪಿರ್ಯಾದಿದಾರರು ಮಹಿಳಾ ಪೊಲೀಸ್ ಠಾಣಾ ಸಿಬ್ಬಂದಿಯವರ ಸಹಕಾರದೊಂದಿಗೆ ಠಾಣೆಗೆ ಕರೆತಂದಿರುತ್ತಾರೆ.
ಆರೋಪಿತರಲ್ಲಿ ಮಗುವಿನ ಬಗ್ಗೆ ಸಮಾಲೋಚನೆಯನ್ನು ಮಾಡಿದಾಗ ಮೂಲ್ಕಿಯ ವಾಸಿಯಾದ ವಾಜಿದ್ ಎಂಬುವವರಿಗೆ ಕಾನೂನು ಬಾಹಿರವಾಗಿ ಮಗುವನ್ನು ನೀಡಿರುವುದಾಗಿ ತಿಳಿಸಿರುತ್ತಾರೆ.
ಮಹಿಳಾ ಪೊಲೀಸ್ ಠಾಣಾ ಉಪನಿರೀಕ್ಷಕರು ವಾಜಿದ್ ನ ಬಗ್ಗೆ ವಿಚಾರಣೆಯನ್ನು ಮಾಡಿ ವಾಜಿದ್ಗೆ ಠಾಣೆಗೆ ಬರುವಂತೆ ತಿಳಿಸಲಾಗಿ ವಾಜಿದ್ತಡರಾತ್ರಿಯಲ್ಲಿ ಠಾಣೆಗೆ ಮಗುವಿನೊಂದಿಗೆ ಹಾಜರಾಗಿದ್ದು, ಮಗುವಿನ ಮಾರಾಟದ ಬಗ್ಗೆ ಸತ್ಯಾಸತ್ಯತೆ ತಿಳಿಯದೇ ಇದ್ದುದ್ದರಿಂದ ಪ್ರಕರಣವನ್ನು ದಾಖಲಿಸಲು ಸಾಧ್ಯವಾಗಿರುವುದಿಲ್ಲ.
ಆಪಾದಿತರಾದ ರಾಬಿಯಾಬಾನು ಮತ್ತು ಖಾಲಿದ್ ಸಯ್ಯದ್ ಮಗುವನ್ನು ಅನಧಿಕೃತವಾಗಿ ಮಗುವನ್ನು ಮಾರಾಟ ಮಾಡಿದ್ದು, ಮತ್ತು ಆಪಾದಿತ ವಾಜಿದ್ ಮಗುವನ್ನು ಅನಧಿಕೃತವಾಗಿ ಪಡೆದುಕೊಂಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.