ಬೆಂಗಳೂರು :ಜುಲೈ 21:ಕರ್ನಾಟಕ ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆ ಹಿನ್ನೆಲೆ ಬೆಂಳೂರಿನಿಂದ ಕಾರವಾರಕ್ಕೆ ಎರಡು ವಿಶೇಷ ರೈಲು ಓಡಾಟಕ್ಕೆ ಕೇಂದ್ರ ಸಚಿವ ವಿ ಸೋಮಣ್ಣ ಸೂಚನೆ ನೀಡಿದ್ದಾರೆ.
ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರ ಮನವಿಗೆ ತಕ್ಷಣ ಸ್ಪಂದಿಸಿದ ಸೋಮಣ್ಣ, ಜುಲೈ 26 ಮತ್ತು 28 ರಂದು ಬೆಂಗಳೂರಿನಿಂದ ಕಾರವಾರಕ್ಕೆ ವಿಶೇಷ ರೈಲುಗಳು ಓಡಾಡಲಿವೆ.
ಬೆಂಗಳೂರಿನಿಂದ 12:30 AM (ಮಧ್ಯರಾತ್ರಿ) ಹೊರಟು ಪಡೀಲ್ ಬೈಪಾಸ್ ಮೂಲಕ ಪ್ರಯಾಣಿಸುತ್ತವೆ. ಸುರತ್ಕಲ್, ಕುಂದಾಪುರ ಮತ್ತು ಮುರ್ಡೇಶ್ವರದಲ್ಲಿ ನಿಲುಗಡೆ ಹೊಂದಿವೆ. ಸಂಜೆ 4 ಗಂಟೆಗೆ (ಮರುದಿನ) ಕಾರವಾರ ತಲುಪಲಿವೆ. ಕಾರವಾರದಿಂದ ರಾತ್ರಿ 11:55 ಕ್ಕೆ ಹೊರಟು, ಮಧ್ಯಾಹ್ನ 3 ಗಂಟೆಗೆ (ಮರುದಿನ) ಬೆಂಗಳೂರಿಗೆ ತಲುಪಲಿದೆ. ಸಾರ್ವಜನಿಕರು ಹೆಚ್ಚುವರಿ ರೈಲು ಸೇವೆಗಳ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಚಿವರು ಮನವಿ ಮಾಡಿದ್ದಾರೆ.