ಚಿಕ್ಕಮಗಳೂರು, ಜೂನ್ 26: ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರು, ವಾಹನಗಳಿಂದ ವೀಕ್ಎಂಡ್ನಲ್ಲಿ ಮುಳ್ಳಯ್ಯನಗಿರಿಗೆ ಆಗಮಿಸುತ್ತಾರೆ. ಹೀಗೆ ಬರುವ ಪ್ರವಾಸಿಗರು ಸ್ವಂತ ವಾಹನದಲ್ಲಿ ಪ್ಲಾಸ್ಟಿಕ್, ಮದ್ಯವನ್ನು ತರುತ್ತಾರೆ. ಇದರಿಂದ ಮುಳ್ಳಯ್ಯಗಿರಿ ಮಲೀನವಾಗುತ್ತಿದೆ ಇದನ್ನು ತಡೆಗಟ್ಟಲು ಜಿಲ್ಲಾಡಳಿತ ಕಂಟ್ರೋಲ್ ಟೂರಿಸಂ ತೆರೆಯಲು ಮುಂದಾಗಿದೆ
ಸರ್ಕಾರ ಮುಳ್ಳಯ್ಯನಗಿರಿಗೆ ಆನ್ಲೈನ್ ಪೋರ್ಟಲ್ ತೆರೆಯಲಿದ್ದು, ನಿತ್ಯ ಇಂತಿಷ್ಟೆ ಪ್ರವಾಸಿಗರು ಭೇಟಿ ನೀಡಬೇಕೆಂದು ನಿಯಮ ಜಾರಿಗೆ ತರಲಿದೆ. ಬುಕ್ಕಿಂಗ್ ಅನ್ನು ಕ್ಯೂಆರ್ ಕೋಡ್ ಅಥವಾ ವೆಬ್ ಪೋರ್ಟಲ್ಗೆ ಭೇಟಿ ನೀಡಿ ಬುಕ್ಕಿಂಗ್ ಮಾಡುವ ಅವಕಾಶವಿದೆ. ಅದು ಕಡಿಮೆ ಜನರಿಗೆ ಮಾತ್ರ ಅವಕಾಶವಿದೆ.
ಜಿಲ್ಲಾಡಳಿತ ಮುಳ್ಳಯ್ಯನಗಿರಿ ಉಳಿವಿಗೆ ಈ ಮಹತ್ವದ ಹೆಜ್ಜೆ ಇಟ್ಟಿದೆ. ಗಿರಿ ಭಾಗಕ್ಕೆ ಕಂಟ್ರೋಲ್ ಟೂರಿಸಂ ಮಾಡದಿದ್ದರೆ ಮುಂದೊಂದು ದಿನ ಗಿರಿಗೆ ಅನಾಹುತ ಕಟ್ಟಿಟ್ಟ ಬುತ್ತಿ. ಈಗಾಗಲೇ ಭಾರಿ ವಾಹನಗಳಿಗೆ ನಿಷೇಧಿಸಲಾಗಿದೆ. ಆದರೆ, ಇದೀಗ ಪ್ರವಾಸಿಗರ ಸಣ್ಣ ಸಣ್ಣ ವಾಹನಗಳಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ.
ಹೀಗಾಗಿ, ಮುಳ್ಳಯ್ಯನಗಿರಿಯ ಪಶ್ಚಿಮ ಘಟ್ಟಗಳ ಸಾಲನ್ನು ಉಳಿಸುವುದು ಅನಿವಾರ್ಯವಾಗಿದೆ. ಮುಂಜಾನೆ ಸಮಯದಲ್ಲಿ ಇಂತಿಷ್ಟು, ಮಧ್ಯಾಹ್ನದ ನಂತರ ಇಂತಿಷ್ಟು ವಾಹನಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ.
ಜಿಲ್ಲಾಡಳಿತ ಕಂಟ್ರೋಲ್ ಟೂರಿಸಂ ತೆರೆಯಲು ಚಿಂತಿಸಿರುವುದನ್ನು ಸ್ಥಳೀಯರು ಮತ್ತು ಪರಿಸರವಾದಿಗಳು ಸ್ವಾಗತಿಸಿದ್ದಾರೆ.