ಉಡುಪಿ:ಜೂನ್ 25:ಉಡುಪಿ ಇಂದ್ರಾಳಿಯಿಂದ ಮುಂದೆ ಸಾಗಿ. ಲಕ್ಷ್ಮೀಂದ್ರ ನಗರ ಫಸ್ಟ್ ಕ್ರಾಸ್ ನಗರ ಇಲ್ಲಿ ರಾಷ್ಟ್ರೀಯ ಹೆದ್ದಾರಿಯ ಇಂಟರ್ಲಾಕ್ ಅಳವಡಿಸುವಲ್ಲಿ ಬಹಳ ದೊಡ್ಡ ಮಟ್ಟದ ಹೊಂಡ ಒಂದು ಕಾಣಸಿಗುತ್ತದೆ.. ಕಾಂಕ್ರೀಟ್ ರಸ್ತೆಯ. ಅಡಿಪಾಯದಲ್ಲಿ ಮೋರಿಯಂತೆ ಕಂಡುಬಂದಿದ್ದು ಅಪಾಯ ಆಗುವ ಮೊದಲೇ ಇದನ್ನು ಸರಿಪಡಿಸಬೇಕು. ಈಗಾಗಲೇ ಮಣ್ಣು ಕೊಚ್ಚಿಹೋಗಿದೆ. ರಾಷ್ಟ್ರೀಯ ಹೆದ್ದಾರಿಯ 169 ಎ ಹೊಸ ರಸ್ತೆಯ ಪಕ್ಕದಲ್ಲಿ ಈಗಾಗಲೇಹೊಂಡ ಕಂಡು ಬಂದಿದೆ.
ಕಾಮಗಾರಿಯ ಬಗ್ಗೆ ತಜ್ಞರ ತಂಡ ಪರಿಶೀಲಿಸುವುದು ಒಳ್ಳೆಯದು ಈ ಹಿನ್ನೆಲೆಯಲ್ಲಿ ಹೆದ್ದಾರಿ ಅಕ್ಕ ಪಕ್ಕದಲ್ಲಿ ಇಂಟರ್ಲಾಕ್ ಅಳವಡಿಸಬೇಕು. ಬಾಕಿ ಇರಿಸಿದ ಕಾಮಗಾರಿ ಪೂರ್ಣಗೊಳ್ಳಬೇಕು ಮಣಿಪಾಲ ಪರ್ಕಳ ಸುತ್ತಮುತ್ತ ಅರ್ಧಂಬರ್ಧ ಇಂಟರ್ಲಾಕ್ ಹಾಕಿದ್ದಾರೆ. ಇಂಟರ್ ಲಾಕ್ ಹಾಕುವ ಕಾಮಗಾರಿ ಪೂರ್ಣಗೊಂಡಿಲ್ಲ. ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ಗುತ್ತಿಗೆದಾರರು ಮತ್ತು ನಗರಸಭೆಗೆ ಸಂಬಂಧಪಟ್ಟಹ ಕುಡಿಯುವ ನೀರಿನ ಪೈಪುಗಳನ್ನು (ವಾರಾಹಿ ಯೋಜನೆ) ಅಳವಡಿಸುವ ಕಾಮಗಾರಿಯನ್ನ ಕ್ಲಪ್ತಸಮಯದಲ್ಲಿ ಮಾಡಬೇಕು.. ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.. ಕೆಲವೊಂದು ಕಡೆ ಇಂಟರ್ ಲಾಕ್ ಅಳವಡಿಸಿಲಿಲ್ಲ.. ಕೆಲವೊಂದು ಕಡೆ ಇಂಟರ್ಲಾಕ್ ಅಳವಡಿಸಿದ್ದಾರೆ.
ಅರೆಬರೆ ಕಾಮಗಾರಿಯ ನಡೆಸಿದ್ದಾರೆ.. ಇಲ್ಲಿ ಬೃಹತ್ ಗಾತ್ರದ ವಾಹನಗಳು ದಿನನಿತ್ಯ ಓಡಾಡುವ ಜಾಗ. ಕೂಡಲೇ ಅದನ್ನು ಸರಿಪಡಿಸಬೇಕು ನೀರು ಹರಿದು ಹೋಗುವಂತೆ ಸಕಲ ಸಿದ್ಧತೆ ನಡೆಸಬೇಕು.. ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.