ಕಾರ್ಕಳ :ಮೇ 21:ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 169 ಮುರತಂಗಡಿ _ ಶುಂಠಿ ಗುಡ್ಡೆ ಸಂಪರ್ಕ ರಸ್ತೆ ತಿರುವಿನಲ್ಲಿ ನಿನ್ನೆ (ಮೇ 20 ಸೋಮವಾರ 2024) ರಾತ್ರಿ ಏಳು ಗಂಟೆಗೆ ಸುರಿದ ಭಾರಿ ಮಳೆಗೆ… ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯ ನೀರು ರತ್ನಾಕರ್ ಕಮತ್ ರವರ ಮನೆಗೆ ನುಗ್ಗಿದ್ದು, ಮನೆಯ ಅಂಗಳದ ಮುಂಭಾಗದಲ್ಲಿ ಇತ್ತೀಚೆಗೆ ಎರಡು ಲಕ್ಷ ರೂಪಾಯಿ ಖರ್ಚು ಮಾಡಿದ್ದ ತಡೆಗೋಡೆ ಧರಾಶಾಯಿ ಯಾಗಿದೆ.
ಎರಡು ವಾರದ ಹಿಂದೆ ಸುರಿದಿದ್ದ ಪ್ರಥಮ ಮಳೆಗೆ ಶುಂಠಿ ಗುಡ್ಡೆ ಸಂಪರ್ಕ ರಸ್ತೆಯಲ್ಲಿ ಕೃತಕ ನೆರೆ ಸೃಷ್ಟಿಯಾಗಿ, ಆ ಬಳಿಕ ರಸ್ತೆಯನ್ನು ಎತ್ತರಿಸಿ ಡಾಮರೀಕರಣ ಗೊಳಿಸಲಾಗಿತ್ತು.
ಆದರೆ ಯಾವುದೇ ಚರಂಡಿ ವ್ಯವಸ್ಥೆಯನ್ನು ಮಾಡದೇ ಇರುವುದರಿಂದ ಇದೀಗ ರಸ್ತೆಯ ನೀರು ರತ್ನಾಕರ್ ಕಾಮತ್ರ ಮನೆಯ ಮುಂಭಾಗದ ತಡೆಗೋಡೆಯನ್ನು ಕೊಚ್ಚಿ ಮನೆಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ಹಾನಿಯಾಗಿದೆ.
ಮಳೆ ನೀರು ಸರಾಗವಾಗಿ ಹರಿದು ಹೋಗಲು ಶಾಶ್ವತವಾದ ಚರಂಡಿ ವ್ಯವಸ್ಥೆ ಮಾಡದಿದ್ದರೆ, ಮಳೆ ಸುರಿಯುವಾಗ ರತ್ನಾಕರ್ ಕಾಮತ್ ರವರ ಕುಟುಂಬ ಆತಂಕದಿಂದಲೇ ದಿನ ಕಳೆಯಬೇಕಾದ ಪರಿಸ್ಥಿತಿ ಬರಬಹುದು.
ಡಿಸೆಂಬರ್ 19 2024 ರಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀವಿ. ಸುನಿಲ್ ಕುಮಾರ್ ರವರು ಪಂಚಾಯತ್ ಆಡಳಿತ ಮಂಡಳಿಯ ಜೊತೆಗೆ ರತ್ನಾಕರ್ ಕಾಮತ್ ರವರ ಮನೆಯ ಮುಂಭಾಗದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಗಮನ ಸೆಳೆದು ಕೂಡಲೇ ಚರಂಡಿ ನಿರ್ಮಿಸುವಂತೆ ನಿರ್ದೇಶನ ನೀಡಿದ್ದರು. .
ರಾಷ್ಟ್ರೀಯ ಹೆದ್ದಾರಿ ಇಲಾಖೆ , ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಇದೀಗ 6 ತಿಂಗಳ ಬಳಿಕ ಪ್ರಥಮ ಮಳೆಗೆ ರತ್ನಾಕರ ಕಾಮತ್ ರವರ ಮನೆಯ ಮುಂಭಾಗದ ಗೋಡೆ ಕುಸಿದು, ಮನೆಯ ಅಂಗಳ ಮತ್ತು ಮನೆಗೆ ನೀರು ನುಗ್ಗಿ ಅಪಾರ ಹಾನಿ ಉಂಟಾಗಿದೆ.