ಕಾರ್ಕಳ : ಫೆಬ್ರವರಿ 15: ಇತಿಹಾಸ ಪ್ರಸಿದ್ಧ ಕಾರಣಿಕದ ದೈವಕ್ಷೇತ್ರಗಳಲ್ಲಿ ಒಂದಾದ ವ್ಯಾಘ್ರಚಾಮುಂಡಿ ಹಾಗೂ ಸಪರಿವಾರ ದೈವಗಳ ನೇಮೋತ್ಸವ ಕಾರ್ಕಳ ತಾಲೂಕಿನ ಕೆರುವಾಶೆ ಗ್ರಾಮದ ಬಂಗ್ಲೆಗುಡ್ಡೆ ಯ ಪಿಲಿಚಂಡಿಗುಡ್ಡೆಯಲ್ಲಿ ಮಂಗಳವಾರ ನಡೆಯಿತು.
ಶಿರ್ಲಾಲು, ಕೂಡುಬೆಟ್ಟು,ಶೆಟ್ಟಿ ಬೆಟ್ಟು ಮಾಳ ಅಜೆಕಾರು ಸೇರಿದಂತೆ ವಿವಿಧ ಗ್ರಾಮಗಳ ಭಕ್ತರು ನೇಮೋತ್ಸವವನ್ನು ಕಣ್ತುಂಬಿಕೊಂಡರು .ವ್ಯಾಘ್ರಚಾಮುಂಡಿ ದೈವಸ್ಥಾನ ಸಮಿತಿಯ ಅಧ್ಯಕ್ಷ ನಾಗೇಶ್ ನಾಯಕ್, ಸಮಿತಿಯ ಕಾರ್ಯದರ್ಶಿ ರಾಘವೇಂದ್ರ ನಾಯ್ಕ್ ,ಅಸ್ರಣ್ಣರಾದ ಪಿ ಕೆ ಜಗದೀಶ್ ಭಟ್ ಉಪಸ್ಥಿತರಿದ್ದರು