ಕಾರ್ಕಳ :ಫೆಬ್ರವರಿ 15:ದ್ರಶ್ಯ ನ್ಯೂಸ್ :ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಕಳದ ವತಿಯಿಂದ ಪುಲ್ವಮಾ ಹುತಾತ್ಮರಾದ ಯೋಧರಿಗೆ ವೀರ ನಮನ ಕಾರ್ಯಕ್ರಮವನ್ನು ಸರ್ವಜ್ಞ ವೃತ್ತದ ಬಳಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಂಗಳೂರು ವಿಭಾಗ ಸಂಘಟನ ಕಾರ್ಯದರ್ಶಿ ಗಳಾದ ಶ್ರೀ ರಾಮ್ ಅಂಗಿರಸ ರವರು ಮಾತಾಡಿ ಯೋಧರು ತನ್ನ ಕುಟುಂಬವನ್ನು ಬಿಟ್ಟು ದೇಶವನ್ನು ರಕ್ಷಣೆ ಮಾಡುತ್ತಾರೆ ಗಡಿಯಲ್ಲಿ ದೇಶವನ್ನು ರಕ್ಷಣೆ ಮಾಡುತ್ತಾರೆ ಆದರೆ ಸಮಾಜವನ್ನು ಯುವಕರು ರಕ್ಷಣೆ ಮಾಡುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕೆಂದು ಹೇಳಿದರು
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಗಣೇಶ್ ಪೂಜಾರಿ, ತಾಲೂಕು ಸಂಚಾಲಕರಾದ ಶ್ರೇಯಸ್ ಅಂಚನ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಪವನ್ ಕುಲಾಲ್, ತಾಲೂಕು ವಿದ್ಯಾರ್ಥಿನಿ ಪ್ರಮುಖ್ ಸೌಮ್ಯ ನಾಯ್ಕ್, ತಾಲೂಕು SFD ಪ್ರಮುಖ್ ವಿನೀತ್ ರಾವ್, ನಗರ ಸಹ ಕಾರ್ಯದರ್ಶಿ ಕಾರ್ತಿಕ್, ಹಾಗೂ ಪ್ರಮುಖ ಕಾರ್ಯಕರ್ತರಾದ ಸುಶಾನ್, ಸರ್ವೇಶ್,ಮನೋಜ್ ಹಾಗೂ ಇನ್ನಿತರ ವಿದ್ಯಾರ್ಥಿಗಳು ಮತ್ತು ಆಟೋ ಚಾಲಕರು ಉಪಸ್ಥಿತರಿದ್ದರು.
ತಾಲೂಕು ಸಹ ವಿದ್ಯಾರ್ಥಿನಿ ಪ್ರಮುಖ್ ರಾದ ಮನ್ವಿತಾ ಕುಲಾಲ್ ಕಾರ್ಯಕ್ರಮ ನಿರೂಪಣೆ ಮಾಡಿದರು