ಕಾರ್ಕಳ :ಜನವರಿ 30:ಕಾರ್ಕಳದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ತರುವ ಸಂಕಲ್ಪದೊಂದಿಗೆ ಕಾರ್ಕಳ ನಗರದಲ್ಲಿ “ಮೋದಿ ಮತ್ತೊಮ್ಮೆ” ಗೋಡೆ ಬರಹಕ್ಕೆ ಕಾರ್ಕಳ ಶಾಸಕರು, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ವಿ ಸುನಿಲ್ ಕುಮಾರ್ ರವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮಹಾವೀರ ಹೆಗ್ಡೆ, ರವೀಂದ್ರ ಮೊಯ್ಲಿ, ಗಿರಿಧರ್ ನಾಯಕ್, ರಾಮಚಂದ್ರ ನಾಯಕ್, ನವೀನ್ ನಾಯಕ್, ನಿತ್ಯಾನಂದ ಪೈ, ವಿಖ್ಯಾತ್ ಶೆಟ್ಟಿ, ಯೋಗೇಶ್ ನಾಯಕ್, ನಿರಂಜನ್ ಜೈನ್, ಶ್ರೀಮತಿ ಪಲ್ಲವಿ ಪ್ರವೀಣ್ ಉಪಸ್ಥಿತರಿದ್ದರು.