ಉಡುಪಿ : ಜನವರಿ 14: ದ್ರಶ್ಯ ನ್ಯೂಸ್ :ಸಂತೆಕಟ್ಟೆ ರೋಬೋ ಸಾಫ್ಟ್ ಎದುರುಗಡೆ ರಾತ್ರಿ 12:00 ಗಂಟೆ ಸುಮಾರಿಗೆ ದ್ವಿಚಕ್ರ ವಾಹನವೊಂದು ಅಪಘಾತವಾಗಿದೆ. ವಾಹನ ಚಾಲಕ ಹಾಲಾಡಿ ಕಕ್ಕುಂಜೆ ಕ್ರಾಸ್ ನಿವಾಸಿ ರಾಜು. (ತಂದೆ ಹೆಸರು ರಾಮ ಮೊಗವೀರ) ಎಂದು ಗುರುತಿಸಲಾಗಿದೆ.
ಕಾರ್ಯ ನಿಮಿತ್ತ ಉಡುಪಿಗೆ ತೆರಳಿದ್ದ ಆಪತ್ಪಾಂಧವ ಈಶ್ವರ್ ಮಲ್ಪೆ ಮತ್ತು ತಂಡಕ್ಕೆ ಕರೆ ಬಂದ ತಕ್ಷಣವೇ ಆಪತ್ಪಾಂಧವ ಈಶ್ವರ್ ಮಲ್ಪೆ ಮತ್ತು ತಂಡವು ಗಾಯಾಳುವನ್ನು ಅಜ್ಜರ ಕಾಡು ಸರಕಾರಿ ಆಸ್ಪತ್ರೆಗೆ ತಮ್ಮ ಖಾಸಗಿ ವಾಹನದಲ್ಲಿ ಕರೆದುಕೊಂಡು ಹೋಗಿ ದಾಖಲಿಸಿದೆ. ಅವರು ಈಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರ ಸಂಬಂಧಿಕರು ಅಥವಾ ಪರಿಚಯಸ್ಥರು ಯಾರಾದರೂ ಇದ್ದಲ್ಲಿ ಅಜ್ಜರಕಾಡು ಸರಕಾರಿ ಆಸ್ಪತ್ರೆ ಸಂಪರ್ಕಿಸುವಂತೆ ಸೂಚಿಸಲಾಗಿದೆ .