ಉಡುಪಿ, ಜ.11; ರಥಬೀದಿ ಇಲ್ಲಿಯ ಶ್ರೀ ಅನಂತೇಶ್ವರ ದೇವಸ್ಥಾನದ ಜನರೇಟರ್ ಕೋಣೆಯಲ್ಲಿ ರದ್ದಿ, ಗುಜರಿ, ತ್ಯಾಜ್ಯ ವಸ್ತುಗಳನ್ನು ಒಂದು ಟೆಂಪೊ ಪ್ರಮಾಣದಲ್ಲಿ ದಾಸ್ತಾನು ಮಾಡಿಡಲಾಗಿದೆ.
ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ, ರಾಜ್ಯದ ಪುರಾತನವಾದ ಪ್ರಸಿದ್ಧ ದೇವಸ್ಥಾನ ಇದಾಗಿದ್ದು. ಜನರೇಟರ್ ಕೊಠಡಿಯಲ್ಲಿ ಅಗ್ನಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ.
ಪರಿಸರದ ಸುತ್ತ ಮುತ್ತಲು ಅಂಗಡಿಗಳು ಇದ್ದು ಸೂಕ್ಷ್ಮ ಪ್ರದೇಶವಾಗಿದೆ. ದೇವಸ್ಥಾನದ ವಠಾರದಲ್ಲಿ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಪವಿತ್ರ ಸ್ಥಳವನ್ನು ಅಪವಿತ್ರಗೊಳಿಸಿದಂತಾಗಿದೆ
ವಿಷ ಜಂತುಗಳು ಅವಿತುಕೊಳ್ಳಲು ಸ್ಥಳಾವಕಾಶವಾಗಿದೆ. ತಕ್ಷಣ ಜಿಲ್ಲಾಧಿಕಾರಿಗಳು, ಅಪಾಯ ಆಹ್ವಾನಿಸ ಬಹುದಾದ ಜನರೇಟರ್ ಕೋಣೆಯಲ್ಲಿ ದಾಸ್ತಾನಾಗಿಟ್ಟಿರುವ ಗುಜರಿ ತ್ಯಾಜ್ಯವಸ್ತುಗಳನ್ನು ವಿಲೇವಾರಿಗೊಳಿಸುವ ಸೂಚನೆಯನ್ನು ಸಂಬಂಧಪಟ್ಟವರಿಗೆ ನೀಡಬೇಕೆಂದು, ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಶಿರೂರು ಅವರು ವಿನಂತಿಸಿಕೊಂಡಿದ್ದಾರೆ.