ಶಿರ್ವ :ಜನವರಿ 02:ದ್ರಶ್ಯ ನ್ಯೂಸ್ :ಎಸ್.ಎಮ್.ಎಸ್. ಕಾಲೇಜು ಶಿರ್ವ ಆಯೋಜಿಸಿದ್ದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ರಂಗಭೂಮಿ ಸ್ಪರ್ಧೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ ತಂಡ ಅಭಿನಯಿಸಿದ “ಏಕಾದಶಾನನ” ಏಕಾಂಕ ನಾಟಕ ಪ್ರಥಮ ಪ್ರಶಸ್ತಿ ಜೊತೆಗೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿತು. ಡಾ| ಜೀವನ್ ರಾಂ ಸುಳ್ಯ ಅವರ ಸಮರ್ಥ ನಿರ್ದೇಶನದಲ್ಲಿ ಮೂಡಿಬಂದ ಈ ಪ್ರಸ್ತುತಿ ಸತತ ಹನ್ನೆರಡನೇ ಬಾರಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವುದು ವಿಶೇಷ ಸಾಧನೆಯಾಗಿದೆ. ಮಿಮಿಕ್ರಿ ಸ್ಪರ್ಧೆಯಲ್ಲಿ ಉಜ್ವಲ್ ಪ್ರಥಮ ಪ್ರಶಸ್ತಿ ವಿಜೇರಾಗಿದ್ದಾರೆ.
ಫೆ. 22, 23 ರಂದು ಮೈಸೂರಿನಲ್ಲಿ ನಡೆಯಲಿರುವ ದಕ್ಷಿಣ ಭಾರತ ಮಟ್ಟದ ಯೂತ್ ಫೆಸ್ಟ್ ಗೆ ಆಯ್ಕೆಯಾಗಿರುತ್ತಾರೆ.