ಉಡುಪಿ: ಜನವರಿ 02: ಬಹು ನಿರೀಕ್ಷೆಯ. ಶೀಂಬ್ರ -ಪರಾರಿ ಸೇತುವೆಯಕಾಮಗಾರಿ. ಹಾಗೂ ಸೇತುವೆ ಎರಡು ಮಗ್ಗುಲಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಂಡರೂ, ಅದೇ ರೀತಿ ನಂತರ ಕೊಳಲಗಿರಿ- ಪರಾರಿ ರಿಂಗ್ ರೋಡ್ ಕಾಮಗಾರಿ ಪೂರ್ಣಗೊಂಡರೂ ಈ ರಸ್ತೆಯಲ್ಲಿ ಸರ್ಕಾರ ಸಾಮ್ಯಕ್ಕೆ ಒಳಪಟ್ಟ ನರ್ಮ್ ಬಸ್ಸು ಸೇವೆ ಓಡಾಟ ನಡೆಸಿ ಸಾರ್ವಜನಿಕರಿಗೆ ಬಸ್ ಸೇವೆ ನೀಡಬೇಕೆಂದು ಮಾನ್ಯ ಉಡುಪಿಯ ಜಿಲ್ಲಾಧಿಕಾರಿ.ಡಾ|ಕೆ ವಿದ್ಯಾ ಕುಮಾರಿಯವರಿಗೆ ಮನವಿ ಸಲ್ಲಿಸಲಾಯಿತು.
ಕೊಳಲಗಿರಿಯಿಂದ. ಹಾವಂಜೆ ಕೀಳಂಜೆಯ ಬಿವಿ ಹೆಗ್ಡೆ ಶಾಲೆ, ಮಹಾವಿಷ್ಣು ಮಹಾಲಿಂಗೇಶ್ವರ ದೇವಸ್ಥಾನ. ರಿಂಗ್ ರೋಡ್ ಸುತ್ತುವರಿದು ಶೀಂಬ್ರ ಸೇತುವೆ.. ಇಂದಿರಾ ಶಿವರಾವ್ ಪಾಲಿಟೆಕ್ನಿಕ್ ಕಾಲೇಜ್, ಭಾರತೀಯ ವಿಕಾಸ ಕೇಂದ್ರ. ಕಾಯಿನ್ ಸರ್ಕಲ್. ಮಣಿಪಾಲ ಟೈಗರ್ ಸರ್ಕಲ್. ಸರಳೇಬೆಟ್ಟು ಜಂಕ್ಷನ್ ನಲ್ಲಿ ಬಡವರಿಗೆಂದು ನಿರ್ಮಿಸಿದ ಸರಳೇಬೆಟ್ಟು ವಿನ ಕೊಡಿಯಲ್ಲಿರಿವ ಸುಮಾರು 470ವಸತಿ ಸಮುಚ್ಚಯದಲ್ಲಿ ವಾಸಿಸುವ ನಗರ ವಾಸಿಗಳಿಗೆ ಈ ಬಸ್ ಸೇವೆ ಆರಂಭಿಸಿದರೆ ತುಂಬಾ ಅನುಕೂಲವಾಗುವಂತೆ ಅದರಂತೆಯೇ ಕೊಳಲಗಿರಿಯಿಂದ ಮಣಿಪಾಲಕ್ಕೆ. ಡಿ ಸಿ, ಕಚೇರಿ ಆರ್ ಟಿ ಓ ಕಚೇರಿಗೆ ಹೋಗುವರೆಗೂ ಅನೇಕ ಮಂದಿ ಉದ್ಯೋಗ ಅರಸಿ ಮಣಿಪಾಲಕ್ಕೆ ಬರುವ ಮಂದಿಗೆ ಹಾಗೂ ಸ್ಥಳೀಯವಾಗಿ ಮಣೆಪಾಲ ಆಸ್ಪತ್ರೆಗೆ ಹೊರರೋಗಿಗಳಾಗಿ ಬರುವವರಿಗೆ ತುಂಬಾ ಪ್ರಯೋಜನವಾಗಲಿದೆ
ಹಾಗೆನೇ ಈ ಬಸ್ ಸೇವೆಯಿಂದ ಸರಳಬೆಟ್ಟುವಿನಿಂದ ಮಣಿಪಾಲಕ್ಕೆ ಬರುವ ಕಾರ್ಮಿಕ ವರ್ಗದವರಿಗೆ ಈ ಬಸ್ಸಿನ ಪ್ರಯೋಜನ ಅನುಕೂಲವಾಗುತ್ತದೆ ಬೆಳಗ್ಗೆನೇ ಶಾಲಾ ಸಮಯ ಹಾಗೂ ಕಚೇರಿಯ ಸಮಯದ ಲ್ಲಿ ಹಾಗೂ ಸಂಜೆ ಮತ್ತೆ ಮನೆ ಸೇರುವಂತಹ ಸಮಯವನ್ನು ನಿರ್ಧಾರ ಪಡಿಸಿ ಕೊಳಲಗಿರಿ ಟು ಸರಳೇಬೆಟ್ಟುವಿಗೆ ನರ್ಮ್ ಬಸ್ ಸಂಚಾರ ನಡೆಸಬೇಕೆಂದು ಸಾಮಾಜಿಕ ಕಾರ್ಯಕರ್ತ ಗಣೇಶ ರಾಜ್ ಸರಳೇಬೆಟ್ಟು ಅವರ ಮುಂದಾಳತ್ವದಲ್ಲಿ ಹಾಗೂ ಕಾಂಗ್ರೆಸ್ನ ಹಿರಿಯ ಮುಖಂಡ ಜಯಶೆಟ್ಟಿ ಬನ್ನಂಜೆ, ಸುರೇಶ್ ನಾರಾಯಣ ಶೆಟ್ಟಿ. ರತ್ನಾಕರ ಮೊಗವೀರ ಹಾವಂಜೆ. ಮೊದಲಾವರು ಮಣೆಪಾಲದಲ್ಲಿ ಜಿಲ್ಲಾಧಿಕಾರಿಗೆ ಮನವಿಸಲ್ಲಿಸಿದರು,