ಕಾರ್ಕಳ :ಡಿಸೆಂಬರ್ 18 : ದ್ರಶ್ಯ ನ್ಯೂಸ್ :ರೋಟರಿ ಕ್ಲಬ್ ಕಾರ್ಕಳ ಮತ್ತು ಪುರಸಭೆ ಕಾರ್ಕಳ ಇವರ ನೇತೃತ್ವದಲ್ಲಿ ಕರುಣಾಳು ಬಾ ಬೆಳಕು ಪ್ರತಿಷ್ಠಾನ ಇವರ ಸಹಯೋಗದೊಂದಿಗೆ ಶಾಲಾ ಮಕ್ಕಳಿಗೆ ಪರಿಸರ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಕಸದಿಂದ ರಸ ಸ್ಪರ್ಧೆಯ ವಿನೂತನ ಕಾರ್ಯಕ್ರಮವನ್ನು ಕಾರ್ಕಳದ ರೋಟರಿ ಕ್ಲಬ್ ನಲ್ಲಿ ಆಯೋಜಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋ. ಜಾನ್ ಡಿಸಿಲ್ವ ಇವರು ವಹಿಸಿಕೊಂಡಿದ್ದರು. ಈ ವರ್ಷದ ಡಿಸ್ಟಿಕ್ ಪ್ರಾಜೆಕ್ಟ್ ಆಗಿರುವ ವೇಸ್ಟ್ ಮ್ಯಾನೇಜ್ಮೆಂಟ್ ಬಗ್ಗೆ ಮಕ್ಕಳಿಗೆ ತಿಳಿ ಹೇಳಲು ಇದೊಂದು ಅವಕಾಶ ಮತ್ತು ಶಾಲಾ ಮಕ್ಕಳಲ್ಲಿ ಈ ವಿಷಯದ ಬಗ್ಗೆ ತಿಳಿ ಹೇಳಿದಾಗ ಮುಂದೊಂದು ದಿನ ಪರಿಸರವನ್ನು ಸಂರಕ್ಷಿಸಲು ನಾವೆಲ್ಲ ಸಾಕ್ಷಿ ಆಗುತ್ತೆವೆ.
ಕಾರ್ಯಕ್ರಮದ ಅತಿಥಿ ಯಾಗಿರುವಂತಹ ಪುರಸಭೆಯ ಮುಖ್ಯ ಅಧಿಕಾರಿಯಾಗಿರುವ ಶ್ರೀಮತಿ ರೂಪ ಶೆಟ್ಟಿ ಇವರು ಕಾರ್ಕಳ ಯಾವುದೇ ಪರಿಸರ ಜಾಗೃತಿ ಕಾರ್ಯಕ್ರಮ ಇದ್ದಾಗ ನಾನು ಖಂಡಿತವಾಗಿಯೂ ಪ್ರೋತ್ಸಾಹಿಸುತ್ತೇನೆ. ನಾವೆಲ್ಲರೂ ಪರಿಸರದ ಒಂದು ಭಾಗ ಪರಿಸರಕ್ಕೆ ನಾವು ಏನು ಕೊಡುತ್ತಿದ್ದೇವೆ ಮುಖ್ಯ ಅಲ್ಲ ಆದರೆ ಪರಿಸರ ನಮಗೇನು ಕೊಡುತ್ತಿದೆ ಎನ್ನುವುದು ಮುಖ್ಯ ಎಂದು ಮಕ್ಕಳಿಗೆ ಕಿವಿ ಮಾತನ್ನು ತಿಳಿಸಿದರು.
ವೇದಿಕೆಯಲ್ಲಿ ಪರಿಸರ ಪ್ರೇಮಿ ಫಿಲಿಕ್ಸ್ ಹಾಗೂ ಪುರಸಭಾ ಸದಸ್ಯ ರಾಗಿರುವಂತಹ ಶ್ರೀಮತಿ ಪಲ್ಲವಿ ಮತ್ತು ಶ್ರೀಮತಿ ಮಮತಾ ಪೂಜಾರಿಯವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತವನ್ನು ಕರುಣಾಳು ಬಾ ಬೆಳಕು ಪ್ರತಿಷ್ಠಾನ ಇದರ ಸ್ಥಾಪಕರಾಗಿರುವ ಶ್ರೀಮತಿ ರಮಿತಾ ಶೈಲೇಂದ್ರ ಅವರು ನಡೆಸಿದರು. ಧನ್ಯವಾದ ಹಾಗೂ ನಿರೂಪಣೆ ರೋ. ಇಕ್ಬಲ್ ಅಹಮದ್ ಬಹುಮಾನ ಕಾರ್ಯಕ್ರಮದ ನಿರೂಪಣೆಯನ್ನು ರೋ. ರೇಖಾ.ಜಿ ಅವರು ಮಾಡಿದರು.