ಉಡುಪಿ : ಡಿಸೆಂಬರ್ 17: ದ್ರಶ್ಯ ನ್ಯೂಸ್ :ತೆಂಕನಿಡಿಯೂರು ಸಮೀಪದ ಮಹಿಳೆ ಶಾಂತಿ (51) ಅವರು ಮನೆಯ ಸ್ಟೋರ್ ರೂಮಿನಲ್ಲಿ ಕಬ್ಬಿಣ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಳಗೆ ಬೀಗ ಹಾಕಿಕೊಂಡು ಶಾಂತಿ ಅವರು ಈ ಕೃತ್ಯವೆಸಗಿದ್ದರು.ಅವರ ಮಗಳು ಮತ್ತು ಅಳಿಯ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದು ವಾಪಸು ಬಂದಾಗ ವಿಷಯ ಗೊತ್ತಾಗಿದೆ ಎನ್ನಲಾಗಿದೆ.