ಪುತ್ತೂರು: ಕೆಎಸ್ಆರ್ ಟಿಸಿ ಬಸ್-ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಬಕ ಸಮೀಪದ ಮಿತ್ತೂರು ಎಂಬಲ್ಲಿ ಡಿ.16ರಂದು ನಡೆದಿದೆ
ಬಿ.ಸಿ. ರೋಡ್ ಕೈಕಂಬ ಮೂಲದ ಆಶಿಮ್ ಮೃತ ಯುವಕ ಎಂದು ಗುರುತಿಸಲಾಗಿದೆ. ಪುತ್ತೂರು ಹೊರವಲಯದ ಕಬಕದಲ್ಲಿ ನಿನ್ನೆ ರಾತ್ರಿ ಕೆಎಸ್ಆರ್ ಟಿಸಿ ಬಸ್-ಬೈಕ್ ನಡುವೆ ಭೀಕರ ಅಪಘಾತ ನಡೆದಿದೆ. ಪರಿಣಾಮ ಬೈಕ್ ಸವಾರ ಆಶಿಮ್ ಮೃತಪಟ್ಟಿದ್ದಾರೆ.