ಕಾರ್ಕಳ ಡಿಸೆಂಬರ್ 16 : ಕಾರು ಚಾಲಕನ ನಿರ್ಲಕ್ಷದಿಂದ ಸ್ಕೂಟರ್ ಸವಾರನೊಬ್ಬ ಅಪಘಾತದಿಂದ ಬಲಿಯಾದ ಘಟನೆ ಸಾಲ್ಮರದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಕಾರ್ಕಳ ಕಡೆಯಿಂದ ಅಜೆಕಾರು ಕಡೆಗೆ ಹೋಗುತ್ತಿದ್ದ ಟಾಟಾ ಪಂಚ್ ಕಾರು ಸಾಲ್ಮರದಲ್ಲಿ ಕಾರನ್ನು ನಿಲ್ಲಿಸಿ.ಹಿಂದಿನಿಂದ ಸ್ಕೂಟರ್ ಬರುತ್ತಿರುವುದನ್ನು ಗಮನಿಸದೇ ಕಾರಿನ ಬಲಭಾಗದ ಡೋರ್ ತೆಗೆದ ಪರಿಣಾಮ ಕಾರ್ಕಳದಿಂದ ಬಂಡೀಮಠದ ಕಡೆಗೆ ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದ ಯಶವಂತ (70) ಅವರ ಸ್ಕೂಟರಿಗೆ ಕಾರಿನ ಡೋರ್ ಬಡಿದು ಸವಾರ ಗಂಭೀರವಾಗಿ ಗಾಯಗೊಂಡಿದು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.