ಮಣಿಪಾಲ : ಡಿಸೆಂಬರ್ 16: ದ್ರಶ್ಯ ನ್ಯೂಸ್ :ಮಣಿಪಾಲ ಸರಳಬೆಟ್ಟುವಿನ ಕೊಡಂಗೆ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಲೀಲಾಶೆಟ್ಟಿಯವರ ಸಾಕು ನಾಯಿ ಯನ್ನು ಮಧ್ಯರಾತ್ರಿ ಯಲ್ಲಿ ತಮ್ಮ ಮನೆಯ ಅಂಗಳದಲ್ಲಿದ್ದ ಸಾಕು ನಾಯಿಯನ್ನು ಆಹಾರ ಅರಸಿ ಬಂದ ಚಿರತೆಯು ಹೊತ್ತುಕೊಂಡು ಹೋಗಿದೆ.
ಅದೇ ರೀತಿ ದೇವಸ್ಥಾನದ ಇನ್ನೊಂದು ಮಗ್ಗುಲುವಿನಲ್ಲಿರುವ ರಸ್ತೆಯಲ್ಲಿ ಮುಂದೆ ಸಾಗಿದಾಗ ಸದಾನಂದ ಅವರ ಮನೆಯ ಎರಡು ನಾಯಿಗಳನ್ನು ಎತ್ತಿಕೊಂಡು ಹೋಗಿದೆ..
ಸ್ಥಳೀಯರಲ್ಲಿ ಈಚಿರತೆಯು ಈಪ್ರದೇಶದಲ್ಲಿ ಕಾಟ ಇರುವುದು ಕಂಡುಬಂದಿದೆ. ಕಳೆದ ಎಂಟು ತಿಂಗಳಿಂದ ಹಿಂದೆ. ಹೆರ್ಗ ಸಮೀಪ ಬಿಡಾಡಿಕೋಣವನ್ನು ಕೊಂದು ಅರ್ಧಭಾಗ ತಿಂದು ಬಿಟ್ಟುಹೋದ ಕೋಣದ ದೇಹ ಸಿಕ್ಕಿದೆ,ಮತ್ತೆ ಈ ಪರಿಸರದಲ್ಲಿ ಆಹಾರ ಅರಿಸಿ ಬಂದ ಚಿರತೆಯ ಕಾಟ ಶುರುವಾಗಿದೆ ಸಂಬಂಧಪಟ್ಟ ಅರಣ್ಯಇಲಾಖೆ ಸೂಕ್ತ ಜಾಗದಲ್ಲಿ ಬೋನುಗಳನ್ನು ಇಟ್ಟು.ಪಟ್ಟೆಹಚ್ಚುವಂತೆ ಮತ್ತೆ ಕಾಡಿಗೆ ಅಟ್ಟಬೇಕೆಂದು ಸ್ಥಳೀಯರಾದ ಮೋಹನ್ ದಾಸ್ ನಾಯಕ್, ಗಣೇಶ್ ರಾಜ್ ಸರಳೇಬೆಟ್ಟು.ಅರಣ್ಯ ಇಲಾಖೆಯನ್ನು ಒತ್ತಾಯಿಸಿದೆ