ಬೆಂಗಳೂರು, ಡಿಸೆಂಬರ್ 9: ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರ ನೇತೃತ್ವದಲ್ಲಿ ಮೀಸಲಾತಿ ರಕ್ಷಣಾ ವೇದಿಕೆ ನಿಯೋಗವು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತು.
ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್, ಮಾಜಿ ಸಚಿವ ಅರವಿಂದ ಲಿಂಬಾವಳಿ, ಅಧ್ಯಕ್ಷ ರವಿ.ಹೆಚ್.ಮಾಕಳಿ, ಕಾರ್ಯಾಧ್ಯಕ್ಷ ಅನಂತ ನಾಯ್ಕ್, ಉಪಾಧ್ಯಕ್ಷ ಆದರ್ಶ್ ಎಲ್ಲಪ್ಪ, ಶಿವಮೊಗ್ಗ ಪಲ್ಲವಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಶಿಳ್ಳೆ ಕ್ಯಾತ ಜಾತಿ ಪ್ರಮಾಣದ ಪತ್ರ ಕುರಿತು ಬಿಎಚ್ ಮಂಜುನಾಥ್ ರವರು ಮನವಿ ಪತ್ರ ಸಲ್ಲಿಸಿದರು.