ಉಡುಪಿ :ನವೆಂಬರ್ 06: ದ್ರಶ್ಯ ನ್ಯೂಸ್ :ಲೋಕ ಕಲ್ಯಾಣ ಕ್ಕಾಗಿ ಅಮೆರಿಕಾದ ಪ್ರಥಮ ದೇವಾಲಯವಾದ ಶ್ರೀ ವೆಂಕಟಕೃಷ್ಣ ಕ್ಷೇತ್ರ ದಲ್ಲಿ ಒಂಬತ್ತು ದಿನಗಳ ಕಾಲ ನಡೆದ ಸಂಹಿತಾ ಯಾಗ ಇಂದು ರಥೋತ್ಸವ ರಂಗಪೂಜೆಯೊಂದಿಗೆ ವಿದ್ಯುಕ್ತವಾಗಿ ಸಮಾಪನೆ ಗೊಂಡಿತು .
ಬೆಳಿಗ್ಗೆ ಶ್ರೀ ಶ್ರೀನಿವಾಸ ದೇವರಿಗೆ ಪ್ರಸನ್ನ ಕಲಶಾಭಿಷೇಕ ಪೂಜ್ಯ ಶ್ರೀಪಾದರು ನೆರವೇರಿಸಿದರು.
ಬಳಿಕ ಅನೇಕ ಭಕ್ತ ಜನರ ಸಮ್ಮುಖದಲ್ಲಿ ಸಹಸ್ರ ಗಣಪತ್ಯಥರ್ವ ಶೀರ್ಷ ಯಾಗ ಸಂಪನ್ನ ಗೊಂಡಿತು.
ಸಾಯಂಕಾಲ ಶ್ರೀನಿವಾಸ ದೇವರಿಗೆ ರಂಗಪೂಜೆ ರಥೋತ್ಸವ ನಡೆದು ,
ಶ್ರೀನಿವಾಸನ ಉತ್ಸವಮೂರ್ತಿಯ ಅಟ್ಟೆಪಲ್ಲಕ್ಕಿ ಕುಣಿತ ಜನರ ವಿಶೇಷ ಮೆಚ್ಚುಗೆ ಗೆ ಪಾತ್ರವಾಯಿತು .
ಈ ಉತ್ಸವದಲ್ಲಿ ಪ್ರಮುಖವಾಗಿ ವಾದನ ಸುತ್ತು ,ಚೆಂಡೆ ಸುತ್ತು ,ಹರಿಭಜನೆ ಸುತ್ತುಗಳ ನರ್ತನ ಗಳಿಂದ ಉಡುಪಿಯ ಭವ್ಯ ಉತ್ಸವಪರಂಪರೆಯನ್ನು ಈ ನೆಲದಲ್ಲಿ ಪರಿಚಯಿಸಿದಂತಾಯಿತು .
ಪೂಜ್ಯಶ್ರೀಪಾದರು ಈ ಕಾರ್ಯಕ್ರಮಗಳನ್ನು ಚೆನ್ನಾಗಿ ನಿರ್ವಹಿಸಿದ ವೈದಿಕ ವಿದ್ವಾಂಸರನ್ನು ಶಾಲು ಹೊದಿಸಿ ಆಶೀರ್ವದಿಸಿದರು .
ಒಟ್ಟಿನಲ್ಲಿ ಹತ್ತು ದಿನಗಳ ಎಡೆಬಿಡದ ಈ ಧಾರ್ಮಿಕ ಉತ್ಸವ ಕಾರ್ಯಕ್ರಮಗಳಿಂದ ಭಕ್ತಜನತೆ ಧನ್ಯಶಾಲಿಗಳಾದರು .